ರಂಗದ ರಾಜ ಮಧೂರು ಶ್ರೀ ರಾಧಾಕೃಷ್ಣ ನಾವಡ
ಯಕ್ಷಗಾನ ಎಂಬುದು ಒಂದು ಗಂಡುಕಲೆ. ಮೇರುಕಲೆ. ಎಲ್ಲಾ ಕಲಾಪ್ರಕಾರಗಳ ಮೇಲೂ ನಮಗೆ ಗೌರವವಿದೆ. ಪ್ರೀತಿಯಿದೆ. ನೋಡಿ ನಾವು ಆನಂದಿಸುತ್ತೇವೆ. ಆದರೂ ಆಕಾಶಕ್ಕೆ ಆಕಾಶವೇ ಸಾಟಿ. ಸಾಗರಕ್ಕೆ ಸಾಗರವೇ ಸಾಟಿ ಎಂಬಂತೆ ಯಕ್ಷಗಾನವು ರಂಜಿಸುತ್ತಿದೆ. ಕಲೆ, ಕಲಾವಿದ, ಪ್ರೇಕ್ಷಕರು ಈ ಮೂರು ವಿಚಾರಗಳು ಪೂರಕವಾಗಿ ಇದ್ದರೂ, ಕಲಾವಿದನಿಗಿಂತ ಕಲೆಯೇ ಶ್ರೇಷ್ಠ. ಪ್ರೇಕ್ಷಕರು ಶ್ರೇಷ್ಠರು. ಪ್ರೇಕ್ಷಕರನ್ನು ಸಭಾಸದರು ಎಂದು ಸಂಬೋಧಿಸಲಾಗುತ್ತದೆ. ಹಾಗಾಗಿಯೇ ಕಲಾವಿದ ರಂಗಪ್ರವೇಶ ಮಾಡಿದಾಗ ಸಭಾ ವಂದನೆಯನ್ನು ಮಾಡುತ್ತಾನೆ. ಕಲಾವಿದನಿಗಾಗಿ ಕಲೆಯಲ್ಲ. ಪ್ರೇಕ್ಷಕರೂ ಅಲ್ಲ. ಕಲೆಗಾಗಿ, ಪ್ರೇಕ್ಷಕರಿಗಾಗಿ ಕಲಾವಿದ. ಗಗನಸದೃಶವಾದ ಯಕ್ಷಗಾನವೆಂಬ ಕಲೆಯಲ್ಲಿ ಕಲಾವಿದರುಗಳೆಂಬ ಅದೆಷ್ಟೋ ನಕ್ಷತ್ರಗಳು ನಮಗೆ ಕಾಣಬಹುದು. ಕಲಾವಿದರೊಬ್ಬರ ಬಗ್ಗೆ ಬರೆಯಲು ಇದೊಂದು ಕಿರುಪ್ರಯತ್ನ ಅಷ್ಟೆ. ಸುಂದೋಪಸುಂದ ಕಾಳಗದ 'ಸುಂದ' ನಾಗಿ ಮಧೂರು ಶ್ರೀ ರಾಧಾಕೃಷ್ಣ ನಾವಡ ಫೋಟೋ : ಶ್ರೀ ಮುರಳಿ ನಾವಡ ಪ್ರಸ್ತುತ ಇವರು ಕಾಸರಗೋಡಿನಲ್ಲಿ ವಾಸವಾಗಿದ್ದರೂ ಮಧೂರು ರಾಧಾಕೃಷ್ಣ ನಾವಡರೆಂದೇ ಪ್ರಸಿದ್ಧರು. ಕೇರಳ ರಾಜ್ಯ ಕಾಸರಗೋಡು ಸಮೀಪದ ಮಧೂರು (ಬನ್ನೂರು) ಇವರ ಹುಟ್ಟೂರು. ಶ್ರೀ ವಿಷ್ಣು ನಾವಡ ಮಧೂರು, ಲೀಲಾವತಿ ಅಮ್ಮ ದಂಪತಿಗಳ 5 ಮಂದಿ ಮಕ್ಕಳಲ