ಹಿರಿಯ ಅನುಭವೀ ಸವ್ಯಸಾಚಿ ಕಲಾವಿದ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್
ಹಿರಿಯ ಸದಸ್ಯರು, ಹೆಣ್ಮಕ್ಕಳು, ಮಕ್ಕಳು ತುಂಬಿರುವ ಮನೆಯು ಅಂದವಾಗಿರುತ್ತದೆ, ಲಕ್ಷಣವಾಗಿರುತ್ತದೆ. ಹಿರಿಯರ ಆಶೀರ್ವಾದ, ನಿರ್ದೇಶನಗಳಿಂದಲೇ ಕಿರಿಯರು ಬೆಳೆದು ಸಾಧಕರಾಗಿ ಕಾಣಿಸಿಕೊಳ್ಳಬಲ್ಲರು. ಜೀವನವೆಂಬ ಪಯಣದಲ್ಲಿ ಅನುಭವಗಳೇ ಪಾಠಗಳಾಗಿರುತ್ತವೆ. ಅದು ಒಳ್ಳೆಯ ಅನುಭವವಾಗಿರಬಹುದು ಅಥವಾ ಕೆಟ್ಟ ಅನುಭವಗಳೇ ಆಗಿರಬಹುದು. ಆದರೆ ಒಂದಂತೂ ಸತ್ಯ. ಈ ಉಭಯ ಅನುಭವಗಳೂ ಮಾನವನಿಗೆ ಬದುಕನ್ನು ರೂಪಿಸಲು ದಾರಿಯನ್ನು ತೋರುತ್ತದೆ. ಬದುಕಿನುದ್ದಕ್ಕೂ ಪಡೆದ ಅನುಭವಗಳೆಂಬ ಪಾಠಗಳಿಂದ ಮನೆಯ ಹಿರಿಯ ಸದಸ್ಯನು ಪಕ್ವನಾಗಿರುತ್ತಾನೆ. ಇದರ ಪರಿಣಾಮವನ್ನು ಮನೆಯ ಕಿರಿಯ ಸದಸ್ಯರು ಅನುಭವಿಸಬೇಕು. ಹಿರಿಯರಿಂದ ಸಲಹೆಗಳನ್ನು ಪಡೆದು, ಮುನ್ನಡೆಯುತ್ತಾ, ತಾನು ಒಳ್ಳೆಯವನೆಂದು ಎಲ್ಲರಿಂದಲೂ ಹೊಗಳಿಸಿಕೊಂಡು ಮನೆಯ ಕೀರ್ತಿಯನ್ನು ಬೆಳಗಿಸಬೇಕು. ಕಿರಿಯರು ಹಿರಿಯರನ್ನು ಗೌರವಿಸಿ ಅವರ ಆಶೀರ್ವಾದ, ಅನುಭವ, ನಿರ್ದೇಶನಗಳನ್ನು ಪಡೆಯುವುದು, ಹಿರಿಯರು ಕಿರಿಯರನ್ನು ವಂಚಿಸದೆ, ಪ್ರೀತಿಸಿ ಸಲಹೆಗಳನ್ನು ನೀಡಿ ಮುನ್ನಡೆಸುವುದು- ಇದು ಭಾರತೀಯ ಸಂಸ್ಕೃತಿ. ಭಾರತೀಯ ಕುಟುಂಬ ಪದ್ಧತಿ. ಮನೆಯಲ್ಲೆಂದಲ್ಲ, ಎಲ್ಲೆಡೆಯಲ್ಲೂ ಈ ವ್ಯವಸ್ಥೆಯ ಅಡಿಯಲ್ಲಿ ಸಾಗಿದರೆ ಆರೋಗ್ಯಪೂರ್ಣ ಸಮಾಜವು ಉಳಿಯುತ್ತದೆ, ನಿರ್ಮಾಣಗೊಳ್ಳುತ್ತದೆ. ಸಂಘ-ಸಂಸ್ಥೆಗಳಲ್ಲೂ, ಕಲಾಪ್ರಕಾರಗಳಲ್ಲೂ ಈ ವ್ಯವಸ್ಥೆಯು ನಡೆದು ಬಂದಿದೆ. ಮುಂದುವರಿದರೆ ಬಲು ಸೊಗಸಾಗಿರುತ್ತದೆ. ಅದುವೇ ನಮ್ಮೆಲ್ಲರ ಆ