ಸವ್ಯಸಾಚಿ ಕಲಾವಿದ - ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ಯಕ್ಷಗಾನದಲ್ಲಿ ಸಂಪ್ರದಾಯದಂತೆ ಪೂರ್ವರಂಗದಿಂದ ತೊಡಗಿ ಹಂತ ಹಂತವಾಗಿ ಬೆಳೆಯುತ್ತಾ ಕಲಾಸೇವೆಯನ್ನು ಮಾಡಿದವನು ಯಾವ ಪಾತ್ರವನ್ನು ನೀಡಿದರೂ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಪೂರ್ವ ರಂಗದಲ್ಲಿ ಅನೇಕ ವರ್ಷಗಳ ಕಾಲ ತೊಡಗಿಸಿಕೊಂಡವನಿಗೆ ತನ್ನಿಂದ ತಾನೇ ಆ ಕಲೆಯು ಸಿದ್ಧಿಸಲೇಬೇಕು. ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವಿದ್ದರೂ ಕಲಾವಿದರು ಆ ಸಾಹಸವನ್ನು ತೋರುವಲ್ಲಿ ಮನಮಾಡಲಾರರು. ಯಾಕೆಂದರೆ ತನ್ನ ವೃತ್ತಿಯಲ್ಲಿ ಸ್ಥಾನದ ಸ್ಥಿರತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ತೊಡಕುಂಟಾದೀತೆಂಬ ಭಯವು ಕಲಾವಿದರಿಗೆ ಕಾಡುವುದು ಸಹಜ. ಆದರೂ ಇಂತಹ ಕಲಾವಿದರು ಯಕ್ಷಗಾನಕ್ಕೆ ಅನಿವಾರ್ಯ. ಕೆಲವೊಮ್ಮೆ ಆಪದ್ಭಾಂಧವರೆನಿಸಿಕೊಳ್ಳುತ್ತಾರೆ. ವೇಷ ಹಂಚುವಿಕೆ, ಪ್ರಸಂಗವನ್ನು ಮುನ್ನಡೆಸುವಲ್ಲಿ ಭಾಗವತರಿಗಿರುವ ಒತ್ತಡವನ್ನು ಇಂತಹ ಕಲಾವಿದರು ಹಗುರಗೊಳಿಸುತ್ತಾರೆ. ತನಗೆ ಇಂತಹ ಪಾತ್ರವೇ ಆಗಬೇಕು. ಬೇರೆ ವೇಷಗಳನ್ನು ಮಾಡಲಾರೆ ಎಂಬ ಹಠಕ್ಕೆ ಬೀಳದೆ, ತನಗೆ ಕೊಟ್ಟ ಯಾವ ಪಾತ್ರವನ್ನಾದರೂ ಮಾಡುವ ಪ್ರತಿಭಾವಂತ ಆಲ್ರೌಂಡರ್ ಕಲಾವಿದರುಗಳನ್ನು ಕಲಾಭಿಮಾನಿಗಳು ಗುರುತಿಸಿಯೇ ಗುರುತಿಸುತ್ತಾರೆ. ಅಂತಹ ಕಲಾವಿದರಲ್ಲೊಬ್ಬರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ. ಪ್ರಸ್ತುತ ಹನುಮಗಿರಿ ಮೇಳದ ಕಲಾವಿದ. ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಪ್ರಜ್ವಲ್ ಕುಮಾರ್ ಅವರು ಬೆಳ್ತಂಗಡಿ ತಾ