‘‘ವೇಷಧಾರಿಯೊಬ್ಬ ಭಾಗವತನಾದ ಅಚ್ಚರಿಯ ಬಗೆ’’ ಯುವ ಭಾಗವತ - ಶ್ರೀ ರವಿಚಂದ್ರ ಕನ್ನಡಿಕಟ್ಟೆ
ಇತ್ತೀಚೆಗೆ ಯಕ್ಷಗಾನ ಕಲೆಗೆ ಸಂಬಂಧಿಸಿದ ಆಮಂತ್ರಣ ಪತ್ರಿಕೆಯನ್ನು ನೋಡಿದ್ದೆ. ‘ಯಕ್ಷ-ಗಾನ-ನಾಟ್ಯ ವೈಭವ’ ಎಂದು ಶೀರ್ಷಿಕೆಯಡಿ ಮುದ್ರಿತವಾಗಿತ್ತು. ನನ್ನನ್ನು ಯೋಚಿಸುವಂತೆ ಮಾಡಿತು ಈ ಆಮಂತ್ರಣ ಪತ್ರಿಕೆ. ಕೆಲವೊಂದು ಬಾರಿ ಇಂತಹ ಘಟನೆಗಳು ನಡೆದಾಗ ನಮಗೆ ಅನುಕೂಲವೇ ಆಗುತ್ತದೆ. ನಾವು ಹುಡುಕುವುದಕ್ಕೆ ಆರಂಭಿಸುತ್ತೇವೆ. ಹುಡುಕುವಿಕೆ ಎಂಬ ಕ್ರಿಯೆಯಿಂದ ಹೊಸ ವಿಚಾರಗಳನ್ನೂ ತಿಳಿಯುತ್ತೇವೆ. ನಮ್ಮ ಶ್ರೇಷ್ಠ ಕಲೆಗೆ ‘ಯಕ್ಷಗಾನ’ ಎಂದು ಹೆಸರು. ಹಾಗೆಂದು ಯಕ್ಷ ಮತ್ತು ಗಾನ ಎಂಬ ಶಬ್ದಗಳೂ ಇವೆ. ಯಕ್ಷ ಎಂದರೆ ದೇವತೆಗಳಲ್ಲಿ ಒಂದು ವರ್ಗ. ಸುರರು, ಕಿನ್ನರರು, ಕಿಂಪುರುಷರು, ಯಕ್ಷರು, ಗಂಧರ್ವರು... ಹೀಗೆ ದೇವತೆಗಳಲ್ಲಿ ಅನೇಕ ಗುಂಪುಗಳು. ವೃಂದ ಸಮೂಹ ನ್ಯಾಯೇಣ ಬದುಕುವ ಕಾರಣದಿಂದಲೇ ದೇವತೆ ಗಳು ‘ವೃಂದಾರಕರು’ ಎಂದು ಕರೆಸಿಕೊಂಡರು. ಗಾನ ಎಂದರೆ ಹಾಡು ಎಂಬುದು ತಿಳಿದಿದೆ. ಆದರೆ ಯಕ್ಷಗಾನ ಎಂದರೇನು? ಆ ಹೆಸರು ಯಾಕೆ ಬಂತು? ಯಕ್ಷಗಾನ ಕಲೆಯು ಯಾವಾಗ ಪ್ರಾರಂಭವಾಯಿತು? ಹೀಗೆ ಪ್ರಶ್ನೆಗಳು ಹುಟ್ಟಿ ಕೊಂಡವು. ಯಕ್ಷಗಾನ ಎಂಬ ಹೆಸರು ಬರಲು ಇದು ಕಾರಣವಿರಲೂಬಹುದು ಎಂದು ಹೇಳಬಹುದು. ಆದರೆ ನಿರ್ಣಯವಿಲ್ಲ. 16ನೇ ಶತಮಾನದ ಕವಿಗಳು ಬರೆದ ಪ್ರಸಂಗವನ್ನು ನಾವು ಆಡುತ್ತೇವೆ. ಹಾಗಾದರೆ ಅದಕ್ಕಿಂತಲೂ ಮೊದಲು ಯಕ್ಷಗಾನ ಇತ್ತೆನ್ನಬಹುದು. ಆದರೆ ಯಾವಾಗ? ಹೇಗಿತ್ತು? ಹೇಳಲು ಶಕ್ಯರಲ್ಲ. ಒಂದಂತೂ ಸತ್ಯ. ಈ ಕಲೆ ಸಾಗರಸದೃಶವಾದುದು. ನಮ್ಮ ಬು