ಯಕ್ಷಗಾನ ಪ್ರದರ್ಶನಗಳಲ್ಲಿ ಪರಿವರ್ತನೆ - ಮಾರಕವೋ? ಪೂರಕವೋ
ಅರ್ಹರನ್ನು ಗೌರವಿಸುವುದು ಮಾನವ ಸಹಜ ಗುಣ. ಮಾನವೀಯತೆ ಇರುವವರು ಅದೇ ತೆರನಾಗಿ ವ್ಯವಹರಿಸುತ್ತಾರೆ. ಇದು ಸಂಸ್ಕಾರ. ಸನಾತನಿಗಳು ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ನಮಗೆ ಕೊಡುಗೆಯಾಗಿ ನೀಡಿದ ಸಂದೇಶವದು. ಅನುಗ್ರಹವೂ ಹೌದು. ಅನಪೇಕ್ಷಿತ ವಿಚಾರಗಳು ಬಂದಾಗ ಆಕ್ಷೇಪಿಸುವುದು, ನಮಗೇಕೆ ಆ ವಿಚಾರ? ವಿರೋಧವೇಕೆ ಕಟ್ಟಿಕೊಳ್ಳಬೇಕು? ಎಂದು ಮೌನವಾಗಿ ಸಹಿಸಿಕೊಳ್ಳುವುದು. ಹೀಗೆ ಎರಡೂ ಕ್ರಿಯೆಗಳನ್ನೂ ನಾವು ಮಾಡುತ್ತೇವೆ. ಮಾನವ ಸಹಜ ಗುಣಗಳಿವು. ಆಕ್ಷೇಪಿಸಿದರೆ ಸ್ವಚ್ಛವಾಗಲೂಬಹುದು. ಟೀಕೆಗೊಳಗಾಗಲೂಬಹುದು. ಮೌನವಾಗಿದ್ದರೆ ಸರಿಮಾಡಿಕೊಳ್ಳಲು ಎಲ್ಲಿದೆ ಅವಕಾಶ? ಹೀಗೆ ಕೆಲವೊಂದು ಬಾರಿ ಉಭಯಸಂಕಟಕ್ಕೊಳಗಾಗಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಈ ಸಮಸ್ಯೆಗಳು ಸಹಜ. ಆದರೂ ಆಡಳಿತ ವರ್ಗವು, ಸಪಾತ್ರರೊಡನೆ, ಆ ಕ್ಷೇತ್ರಕ್ಕೆ ಸಂಬಂಧಪಟ್ಟು, ಇದಮಿತ್ಥಂ ಎಂದು ಹೇಳಬಲ್ಲ ವಿದ್ವಾಂಸರೊಡನೆ ವಿಮರ್ಶಿಸಿ ನಿರ್ಣಯವನ್ನು ಕೈಗೊಳ್ಳುವುದು ಹಿಂದಿನಿಂದಲೂ ನಡೆದು ಬಂದ ರೀತಿ. ಅದನ್ನು ಕೇಳಿ ಸನ್ಮಾರ್ಗದಲ್ಲಿ ನಡೆಯುವವರೇ ಹೌದು ನಮ್ಮವರು. ಕೇಳದೆ ನಿರ್ಲಕ್ಷಿಸಿದವರಿಗೆ ಶಿಕ್ಷೆ ಎಂಬ ನಿಯಮವೂ ನಮ್ಮ ಸಮಾಜದ ಪದ್ಧತಿಯಲ್ಲವೇ? ಎಲ್ಲಾ ಕಲಾಪ್ರಕಾರಗಳಲ್ಲೂ ನಮಗೆ ಗೌರವವಿದೆ. ಪ್ರತಿಯೊಂದು ಕಲೆಯೂ ತನ್ನದೇ ಆದ ಸ್ವರೂಪ ಮತ್ತು ಸೌಂದರ್ಯವನ್ನು ಹೊಂದಿವೆ. ಕಲಾಪ್ರಕಾರಗಳು ಉತ್ತಮ ಸಂದೇಶಗಳನ್ನೂ ಮನೋರಂಜನೆಯನ್ನೂ ನೀಡ