ಶ್ರೇಷ್ಠ ಕಲಾಸಂಘಟಕರಲ್ಲೊಬ್ಬರು - ಪದ್ಮನಾಭ ಕಟೀಲು
ಮುಂಬಯಿಯಂತಹಾ ದೈತ್ಯ ನಗರಗಳಲ್ಲಿ, ಸಾಗರದಾಚೆಗಿನ ದೂರದ ದೇಶಗಳಲ್ಲಿ ಕಲಾ ಸಂಘಟನೆ ಅಷ್ಟು ಸುಲಭವಲ್ಲ. ಕಲಾವಿದರನ್ನು ಕರೆಸಿಕೊಂಡು ಪ್ರದರ್ಶನಗಳನ್ನು ಏರ್ಪಡಿಸುವುದು ಎಂದರೆ ಅದೊಂದು ಸಾಹಸವೇ ಹೌದು. ಗುರಿಯು ಸುಂದರವಾದರೂ ಆ ಗುರಿಯನ್ನು ತಲುಪಲು ಕ್ರಮಿಸಬೇಕಾಗಿರುವ ದಾರಿಯು ಅತಿ ದುರ್ಗಮವಾದುದು. ದಾರಿಯ ಬಗ್ಗೆ ಗಮನಹರಿಸದೆ ಸಾಹಸದಿಂದ ಅಡೆತಡೆಗಳನ್ನು ನಿವಾರಿಸಿ, ಕಷ್ಟನಷ್ಟಗಳನ್ನು ಗಣನೆಗೆ ತಾರದೆ ಛಲದಿಂದ ಸಾಗಿದಾಗ ಮಾತ್ರ ಗುರಿಯನ್ನು ತಲುಪಬಹುದು. ಕಲ್ಲು, ಮಣ್ಣು ಕೊಳೆಗಳನ್ನೆಲ್ಲಾ ಕೊರೆದು ಭೂಮಿಯನ್ನು ತೋಡಿದಾಗ ಮಾತ್ರ ಅಲ್ಲವೇ ಸಿಹಿನೀರು ಸಿಗೋದು. ದೂರದ ನಗರಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಬೇಕಿದ್ದರೆ ಸಂಘಟನಾ ಕೌಶಲ್ಯವನ್ನು ಅದ್ಭುತವಾಗಿ ಹೊಂದಿರಬೇಕು. ನಾಯಕತ್ವದ ಗುಣವು ಬೇಕು. ಆ ಊರಿನ ಸಂಪೂರ್ಣ ಮಾಹಿತಿಯಿರಬೇಕು. ಯೋಚನೆ, ಯೋಜನೆಗಳೆಲ್ಲಾ ಬಲಿಷ್ಠವಾಗಿರಬೇಕು. ಸಂಘಟನಾ ಚಾತುರ್ಯವನ್ನು ಹೊಂದಿ ಸ್ವಯಂ ಪ್ರತಿಭಾವಂತನಾಗಿದ್ದರೆ ಸಾಲದು. ಶ್ರೀ ದೇವರ ಅನುಗ್ರಹವೂ ಬೇಕು. ಪ್ರತಿಭೆಗೆ ದೇವರ ಅನುಗ್ರಹವೂ ಸೇರಿದಾಗ ಮುಟ್ಟಿದ್ದೆಲ್ಲಾ ಬಂಗಾರವಾಗುವುದು. ಇಲ್ಲವಾದರೆ ಸಂಘಟಕನು ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿಯು ಒದಗುವ ಸಾಧ್ಯತೆಗಳಿವೆ. ಏನೇ ಅಡೆ ತಡೆಗಳಿರಲಿ, ಕಷ್ಟ ನಷ್ಟಗಳಿರಲಿ, ನೋವು ನಲಿವುಗಳಿರಲಿ, ತಾವು ಎಲ್ಲಿದ್ದರೂ ಅತೀವವಾಗಿ ಪ್ರೀತಿಸುವ ಯಕ್ಷಗಾನವನ್ನು ಬಿಟ್ಟು ಬದುಕಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಕಲಾವಿ