ಸರ್ಪಂಗಳ ಯಕ್ಷೋತ್ಸವ
ಯಕ್ಷಗಾನವು ನಮ್ಮ ನಾಡಿನ ಹೆಮ್ಮೆಯ ಸಂಕೇತವಾದ ಕಲೆ. ಪಂಡಿತರಿಂದ ತೊಡಗಿ ಪಾಮರರ ವರೇಗೆ ಪ್ರತಿಯೊಬ್ಬರನ್ನೂ ಆಕರ್ಷಿಸಿ, ಅವರೆಲ್ಲರ ಮನಸೂರೆಗೊಂಡು ರಂಜನೆಯನ್ನು ನೀಡಿದ ಕಲಾಪ್ರಕಾರವು ಯಕ್ಷಗಾನದಂತೆ ಬೇರೊಂದಿಲ್ಲ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತಿ ಮನೆಗಳಲ್ಲೂ ಕಲಾವಿದರೋ, ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವ ಕಲಾಭಿಮಾನಿಗಳೋ, ಕಲಾಪೋಷಕರೋ ಇದ್ದೇ ಇರುತ್ತಾರೆ. ಜನಮಾನಸದಲ್ಲಿ ಯಕ್ಷಗಾನ ಎಂಬ ಅನುಪಮವಾದ ಕಲೆಯು ಈ ತೆರನಾಗಿ, ಭದ್ರವಾಗಿ ನೆಲೆಯೂರಿ ವಿಜೃಂಭಿಸುತ್ತಿದೆ ಎಂಬುದು ನಮಗೆಲ್ಲರಿಗೂ ಸಂತೋಷದ ವಿಚಾರ. ಹಿಂದಿನ ತಲೆಮಾರಿನ ಅನೇಕರು ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬಹಳಷ್ಟು ಶ್ರಮಿಸಿದರು. ದೇಶ ವಿದೇಶಗಳಲ್ಲಿ ಇಂದು ಕಲಾಪ್ರದರ್ಶನಗಳು ನಡೆಯುತ್ತಿವೆ. ಇದಕ್ಕೆ ಕಾರಣ ಸ್ಥಾನದಲ್ಲಿ ಅನೇಕರಿದ್ದಾರೆ. ಹಿರಿಯ ಕಲಾವಿದರು, ಪ್ರೇಕ್ಷಕರು, ಕಲಾಪೋಷಕರ ಪರಿಶ್ರಮ, ತ್ಯಾಗಗಳಿಂದ ಕಲೆಯು ಈಗ ವಿಶ್ವವ್ಯಾಪಿಯಾಗಿದೆ. ಅದರ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಯಶಸ್ವೀ ಯಕ್ಷಗಾನ ಪ್ರದರ್ಶನವೊಂದು ನಡೆಯಿತು ಎಂದಾದರೆ ಅದಕ್ಕೆ ಕಲಾವಿದರು ಮಾತ್ರ ಕಾರಣರಲ್ಲ. ಕಲಾವಿದರು ಅರ್ಪಣಾಭಾವದಿಂದ ಅಭಿನಯಿಸುತ್ತಾರೆ. ತಮ್ಮ ಕರ್ತವ್ಯವೆಂದು ತಿಳಿದು ಮಾಡುತ್ತಾರೆ. ಸಹೃದಯೀ ಪ್ರೇಕ್ಷಕರೂ ಬೇಕು. ಅವರು ಕಲಾವಿದರ ಅಭಿನಯವನ್ನು ಆಸ್ವಾದಿಸುತ್ತಾರೆ. ಜತೆಗೆ ಪ್ರದರ್ಶನಗಳನ್ನು ಏರ್ಪಡಿಸುವವರು ಬೇಕು. ಉ