ಯಕ್ಷಗಾನ ಕಲಾರಂಗ (ರಿ.) ಉಡುಪಿ ಸಂಸ್ಥೆಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಪ್ರಶಸ್ತಿ
ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನವನ್ನು ಉಳಿಸಿ ಬೆಳೆಸುವುದಕ್ಕಾಗಿ, ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಚಿಗುರೊಡೆದ ಸಂಸ್ಥೆಯೇ ಯಕ್ಷಗಾನ ಕಲಾರಂಗ (ರಿ.) ಉಡುಪಿ. ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಕಲಾವಿದರಿಗೆ ನೆರಳನ್ನು ನೀಡುತ್ತಿದೆ. ಈಗಿನಂತೆ ವಾಹನ ಸೌಕರ್ಯ, ಮಾಧ್ಯಮಗಳಿಲ್ಲದ ಕಾಲ. ಪ್ರದರ್ಶನ ಗಳ ಸಂಖ್ಯೆಯೂ ಆಗ ತೀರಾ ವಿರಳ. ಆದರೂ ಅದೆಷ್ಟೇ ಕಲಾವಿದರು ನಡೆದುಕೊಂಡೇ ಸಾಗಿ ಕಷ್ಟಪಟ್ಟು ಕಲಾಮಾತೆಯ ಸೇವೆಯನ್ನು ಮಾಡಿದರು. ಸಂಘಟಕರು, ದಾನಿಗಳು, ಕಲಾಭಿಮಾನಿಗಳು ಸಹಕರಿಸಿದರು. ಭಕ್ತಿಯು ಪರಮಾವಧಿಗೇರಿದಾಗ ಪರಮಾತ್ಮನು ಪ್ರಸನ್ನನಾಗುತ್ತಾನೆ ಎಂಬ ಮಾತು ನಿಜಕ್ಕೂ ಸತ್ಯ. ಇವರೆಲ್ಲರ ಕಷ್ಟವನ್ನು ಕಂಡು ಕಲಾಮಾತೆಯ ಮನಸ್ಸು ಕರಗಿರಬೇಕು. ಭಕ್ತಿಪೂರ್ವಕ, ಕಷ್ಟಪಟ್ಟು ಮಾಡಿದ ಸೇವೆಯಿಂದ ಮಹಾತಾಯಿಯು ಸಂತೋಷಗೊಂಡಿರಬೇಕು. ಅನುಗ್ರಹಿಸೋಣ ಎಂಬ ನಿರ್ಣಯಕ್ಕೆ ಬಂದಿರಬೇಕು. ಯಕ್ಷಗಾನ ಕಲಾರಂಗ (ರಿ.) ಉಡುಪಿ ಎಂಬ ಶ್ರೇಷ್ಠ ಸಂಸ್ಥೆಯ ಹುಟ್ಟಿಗೆ ಅವಳೇ ಪ್ರೇರಕ ಶಕ್ತಿಯಾಗಿರಬೇಕು. ಅಲ್ಲಾ ಕಲಾವಿದರ, ಕಲಾವಿದ ರಾಗಬೇಕೆಂದು ಹಂಬಲಿಸುವ ಎಳೆಯರ ಸೌಭಾಗ್ಯವೋ? 1975ನೇ ಇಸವಿ ಈ ಸಂಸ್ಥೆಯು ಲೋಕಾರ್ಪಣೆಗೊಂಡಿತ್ತು. ಇಲ್ಲಿಯ ವರೇಗೆ ಯಕ್ಷಗಾನ ಮತ್ತು ಕಲಾವಿದರಿಗಾಗಿ ಸಂಸ್ಥೆಯೊಂದು ಹುಟ್ಟಿ ಕಾರ್ಯಾಚರಿಸದೇ ಇದ್ದುದು ವಿಚಿತ್ರವಾದರೂ ಸತ್ಯ! ಯಕ್ಷಗಾನ ಕಲೆಯನ್ನು ಪ್ರೀತಿಸಿ ಗೌರವಿಸುವ, ಅದರ